ಮಂತ್ರಾಲಯದಲ್ಲಿ ಮೇ 8ರಂದು ರಾಘವೇಂದ್ರ ಸ್ವಾಮಿಗಳ 20 ಸಾವಿರ ಚದರ ಅಡಿ ವಿಸ್ತೀರ್ಣದ ಚಿತ್ರವನ್ನು ರಂಗೋಲಿ ಬಳಸಿ ನಿರ್ಮಿಸಲಾಗುವುದು ಎಂದು ಕಲಾವಿದ ಪುನೀತ್ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ತಂಡದಲ್ಲಿ 9 ಜನ ಸದಸ್ಯರಿದ್ದು, ಕೇವಲ 12 ಗಂಟೆಯಲ್ಲಿ ರಂಗೋಲಿ ಬಿಡಿಸಿ ವಿಶ್ವ ಹಾಗೂ ದೇಶೀಯ ದಾಖಲೆ ನಿರ್ಮಿಸಲು ಮುಂದಾಗಿದ್ದೇವೆ ಎಂದರು. ಇದಕ್ಕಾಗಿ ಸುಮಾರು 800 ಕೆ.ಜಿ ರಂಗೋಲಿ ಅಗತ್ಯವಿದೆ ಎಂದು ಅವರು ತಿಳಿಸಿದರು.
short by
Lloyd Dias /
08:24 pm on
04 May