For the best experience use Mini app app on your smartphone
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿರುವ ಪೊಲೀಸರು ನಟ ದರ್ಶನ್, ಸ್ನೇಹಿತೆ ಪವಿತ್ರಾ ಗೌಡ ಸೇರಿ 9 ಜನ ಆರೋಪಿಗಳನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದ್ದಾರೆ. ರೇಣುಕಾಸ್ವಾಮಿ ಕೊಲೆಗೈದ ಪಟ್ಟಣಗೆರೆ ಶೆಡ್‌ನಲ್ಲಿ ರಕ್ತದ ಮಾದರಿ ಹಾಗೂ ಕೂದಲು ದೊರೆತಿದ್ದು, ಇದು ಯಾರದ್ದು ಎಂಬುದರ ಬಗ್ಗೆ ನಿಖರವಾಗಿ ತಿಳಿಯಲು ಪೊಲೀಸರು ಡಿಎನ್‌ಎ ಪರೀಕ್ಷೆಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
short by aboobakker / 06:59 pm on 19 Jun
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಅವರ ವೈಯಕ್ತಿಕ ವಿಚಾರಗಳು ಹಾಗೂ ಕುಟುಂಬದ ಕುರಿತು ಸುಳ್ಳು ಸುದ್ದಿ ಪ್ರಕಟಿಸದಂತೆ ಅವರ ಪತ್ನಿ ವಿಜಯಲಕ್ಷ್ಮಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಈ ಕುರಿತು ಪೋಸ್ಟ್ ಮಾಡಿರುವ ಅವರು, “ಅಧಿಕಾರಿಗಳು ನೀಡುವ ಅಧಿಕೃತ ಮಾಹಿತಿ ಮಾತ್ರ ಪ್ರಸಾರ ಮಾಡಬೇಕೆಂದು ವಿನಂತಿಸುತ್ತೇನೆ. ನಮ್ಮ ಕಾನೂನಿನ ಮೇಲೆ ಸಂಪೂರ್ಣ ನಂಬಿಕೆ ಇದೆ” ಎಂದು ಬರೆದುಕೊಂಡಿದ್ದಾರೆ.
short by aboobakker / 10:17 pm on 19 Jun
ಮಂತ್ರಾಲಯದಲ್ಲಿ ₹5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕರ್ನಾಟಕ ಭವನದ ಕಾಮಗಾರಿ ಕಳಪೆಯಾಗಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆಗೆ ವಹಿಸಲು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಆದೇಶಿದ್ದಾರೆ. ಕರ್ನಾಟಕದಿಂದ ಮಂತ್ರಾಲಯಕ್ಕೆ ಹೋಗುವ ಭಕ್ತರ ಅನಕೂಲಕ್ಕಾಗಿ 100 ಕೊಠಡಿಗಳ ಅತಿಥಿಗೃಹ ನಿರ್ಮಾಣಕ್ಕೆ 2010ರಲ್ಲಿ 5 ಕೋಟಿ ಮಂಜೂರು ಮಾಡಲಾಗಿತ್ತು. 2019ರಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸರ್ಕಾರಕ್ಕೆ ಭವನವನ್ನು ಹಸ್ತಾಂತರಿಸಲಾಗಿತ್ತು.
short by vinayak / 05:43 pm on 19 Jun
ಮನೆ ಮನೆಯಿಂದ ಕಸ ಸಂಗ್ರಹಿಸುವ ಸಲುವಾಗಿ ಮಂಗಳೂರು ಮಹಾನಗರ ಪಾಲಿಕೆ 15 ಜನ ಮಹಿಳಾ ಪೌರಕಾರ್ಮಿಕರಿಗೆ ಇ-ರಿಕ್ಷಾ ಚಾಲನಾ ತರಬೇತಿ ನೀಡುತ್ತಿದೆ. ಮುಂದಿನ 30 ದಿನಗಳಲ್ಲಿ ತರಬೇತಿ ಪಡೆದ ಮಹಿಳಾ ಪೌರಕಾರ್ಮಿಕರು ಕಸ ಸಂಗ್ರಹಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಪಾಲಿಕೆ ಆಧಿಕಾರಿಗಳು ಹೇಳಿದ್ದಾರೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಪಾಲಿಕೆ 24 ಇ-ರಿಕ್ಷಾಗಳನ್ನು ಪಡೆದಿದೆ.
short by lloyd / 06:59 pm on 19 Jun
ಕುಡುಗೋಲು ಕಣ ರಕ್ತಹೀನತೆ (ಸಿಕೆಲ್ ಸೆಲ್ ಅನೀಮಿಯಾ) ನಿರ್ಮೂಲನೆ ಮಾಡಲು ‘ಪ್ರಾಜೆಕ್ಟ್ ಚಂದನ' ಕಾರ್ಯಕ್ರಮಕ್ಕೆ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬುಧವಾರ ಚಾಲನೆ ನೀಡಿದ್ದಾರೆ. ಈ ಯೋಜನೆಯು ಸಿಕೆಲ್ ಸೆಲ್ ಅನೀಮಿಯಾ ಹೊಂದಿರುವ ರೋಗಿಗಳಿಗೆ ನೆರವಾಗಲಿದೆ. ಮುಂದಿನ 2 ವರ್ಷ ಅವಧಿಗೆ ತಪಾಸಣೆ, ತರಬೇತಿ, ಜಾಗೃತಿಯನ್ನು ಈ ಯೋಜನೆಯಡಿ ನೀಡಲಾಗುತ್ತದೆ. ರಾಜ್ಯದ 2,018 ಆದಿವಾಸಿಗಳಲ್ಲಿ ಸಿಕೆಲ್ ಸೆಲ್ ಅನೀಮಿಯಾ ಕಂಡುಬಂದಿದೆ.
short by lloyd / 08:11 pm on 19 Jun
ಕರ್ನಾಟಕದ ಕರಾವಳಿ ಭಾಗದಲ್ಲಿ ಗುರುವಾರ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣ ಅಥವಾ ಗುಡುಗು ಸಹಿತ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಜೂನ್ 23ರಂದು ಕರಾವಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
short by lloyd / 06:25 pm on 19 Jun
ಮಯೂರ ಬಾಲಭವನದಲ್ಲಿ ಹಣಕಾಸು ಅವ್ಯವಹಾರ ಆರೋಪ ಹಿನ್ನೆಲೆ ಇಬ್ಬರು ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿ, ಮತ್ತಿಬ್ಬರನ್ನು ಅಮಾನತುಗೊಳಿಸಲಾಗಿದೆ. ಮಯೂರ ಬಾಲ ಭವನ ಸಿಬ್ಬಂದಿಗಳು ಇಲ್ಲಿಗೆ ಬರುವ ಪ್ರವಾಸಿಗರಿಂದ ಬಾಲಭವನ ಸಂಸ್ಥೆಯ ಕ್ಯೂ ಆರ್ ಕೋಡ್ ಬಳಸದೇ ವೈಯಕ್ತಿಕ ಖಾತೆಯ ಕ್ಯೂ ಆರ್ ಕೋಡ್ ಬಳಸಿ ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದರು. ಹಣ ದುರುಪಯೋಗದ ತಪ್ಪೊಪ್ಪಿಗೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
short by vinayak / 07:09 pm on 19 Jun
ಭದ್ರಾ ನದಿಯ ಹಿನ್ನೀರಿನಲ್ಲಿ ತೆಪ್ಪ ಮಗುಚಿ ಮೂವರು ಪ್ರವಾಸಿಗರು ನೀರುಪಾಲಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ. ಶಿವಮೊಗ್ಗದ ಆದೀಲ್, ಸಾಜೀದ್ ಹಾಗೂ ಅಫ್ದಾಖಾನ್ ನೀರುಪಾಲಾದವರು ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ವನ್ಯಜೀವಿ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿದ್ದು, ನೀರುಪಾಲಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ವರದಿಯಾಗಿದೆ.
short by aboobakker / 08:10 pm on 19 Jun
ಕರ್ನಾಟಕದ ಪ್ರತಿ ಹೋಬಳಿಯಲ್ಲೂ ಒಂದು ವಸತಿ ಶಾಲೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಘೋಷಿಸಿದ್ದಾರೆ. SSLC ಮತ್ತು ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಮಾತನಾಡಿದ ಅವರು, “ಮೊದಲ ಬಜೆಟ್ ಮಂಡಿಸುವ ವೇಳೆ ಮೊರಾರ್ಜಿ ಶಾಲೆಗಳನ್ನು ಪ್ರಾರಂಭಿಸಿದೆ. ಈಗ ಸಮಾಜ ಕಲ್ಯಾಣ ಇಲಾಖೆಯ 833 ಸೇರಿ ಒಟ್ಟು 946 ವಸತಿ ಶಾಲೆಗಳಿವೆ” ಎಂದರು.
short by lloyd / 08:26 pm on 19 Jun
ಮಹಿಳೆಯೊಂದಿಗೆ ಒಪ್ಪಿತ ಸಂಬಂಧವಿದ್ದರೂ ಅದು ಆಕೆಯ ಮೇಲೆ ಹಲ್ಲೆ ನಡೆಸಲು ಇರುವ ಲೈಸನ್ಸ್‌ ಅಲ್ಲ ಎಂದು ಹೇಳಿರುವ ಹೈಕೋರ್ಟ್‌, ಹಲವು ವರ್ಷಗಳ ಸಂಬಂಧವಿಟ್ಟುಕೊಂಡಿದ್ದ ವ್ಯಕ್ತಿಯ ಮೇಲೆ ಮಹಿಳೆ ಹೂಡಿದ್ದ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ. ಪ್ರಕರಣ ರದ್ದು ಕೋರಿ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ. ಆದರೆ, ಪ್ರಕರಣದಲ್ಲಿದ್ದ ಅತ್ಯಾಚಾರ ಮತ್ತು ವಂಚನೆ ಆರೋಪಗಳನ್ನು ಕೋರ್ಟ್ ರದ್ದುಗೊಳಿಸಿದೆ.
short by aboobakker / 10:16 pm on 19 Jun
ಕಾಡಾನೆ ದಾಳಿ ತಡೆಗೆ ಚಿಕ್ಕಮಗಳೂರು ಜಿಲ್ಲೆ ಆಲ್ದೂರು, ಸಾರಗೋಡು ವ್ಯಾಪ್ತಿಯ 80 ಕಿ.ಮೀ.ಪ್ರದೇಶದಲ್ಲಿ ಅರಣ್ಯ ಇಲಾಖೆ ‘ಟೆಂಟಿಕಲ್‌ ಬೇಲಿ’ ನಿರ್ಮಿಸಲು ಮುಂದಾಗಿದೆ. 18 ಅಡಿ ಎತ್ತರದ ತೂಗು ಮಾದರಿಯಲ್ಲಿರುವ ಈ ವ್ಯವಸ್ಥೆ ಸೌರಶಕ್ತಿ ಆಧಾರಿತವಾಗಿದೆ. ಇದರಲ್ಲಿ 12 ವೊಲ್ಟ್‌ ವಿದ್ಯುತ್‌ ಹರಿಸುವುದರಿಂದ ಬೇಲಿ ತಾಕಿದರೆ ಪ್ರಾಣಿಗಳಿಗೆ ಸಣ್ಣದಾಗಿ ವಿದ್ಯುತ್‌ ಸ್ಪರ್ಶದ ಅನುಭವವಾಗಿ ಕೂಡಲೇ ಅವುಗಳು ಹಿಂದಕ್ಕೆ ಹೋಗುತ್ತವೆ. ವಿದ್ಯುತ್‌ನಿಂದ ಪ್ರಾಣಿಗಳಿಗೆ ಅಪಾಯವಿಲ್ಲ.
short by vinayak / 05:18 pm on 19 Jun
ಮುಂಬೈ-ಹುಬ್ಬಳ್ಳಿ-ಮುಂಬೈ ನಡುವೆ ಜುಲೈ 15ರಿಂದ ದೈನಂದಿನ ವಿಮಾನಗಳು ನಿರಂತರವಾಗಿ ಸೇವೆ ನೀಡಲಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. IndiGo6E ವಿಮಾನ ಸಂಚಾರ ಪುನರಾರಂಭಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ಸಹ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ. ಮಧ್ಯಾಹ್ನ 3ಗಂಟೆಗೆ ಮುಂಬೈನಿಂದ ತೆರಳುವ ವಿಮಾನ ಸಂಜೆ 4:10ಕ್ಕೆ ಹುಬ್ಬಳ್ಳಿ ತಲುಪಲಿದೆ. ಸಂಜೆ 4.40ಕ್ಕೆ ಹುಬ್ಬಳ್ಳಿಯಿಂದ ನಿರ್ಗಮಿಸಿ 5.50ಕ್ಕೆ ಮುಂಬೈ ತಲುಪಲಿದೆ.
short by vinayak / 06:31 pm on 19 Jun
ನಟ ದರ್ಶನ್ ಮತ್ತು ಅವರ ಆಪ್ತರಿಂದ ಹತ್ಯೆಗೀಡಾದ 33 ವರ್ಷದ ರೇಣುಕಾ ಸ್ವಾಮಿ ಅವರ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಗೊಂಡಿದ್ದು, ರೇಣುಕಾಸ್ವಾಮಿಗೆ ಒದೆದ ರಭಸಕ್ಕೆ ಅವರ ವೃಷಣ ಛಿದ್ರಗೊಂಡಿದೆ ಮತ್ತು ಸಾಯುವ ಮೊದಲು ವಿದ್ಯುತ್ ಶಾಕ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಫೋರೆನ್ಸಿಕ್ ಸಾಕ್ಷ್ಯದ ಪ್ರಕಾರ, ರೇಣುಕಾ ಅವರ ದೇಹದಾದ್ಯಂತ 15 ಗಂಭೀರವಾದ ಗಾಯಗಳಾಗಿವೆ. ನಾಯಿಗಳು ರೇಣುಕಾ ಮುಖದ ಭಾಗಗಳನ್ನು ಮತ್ತು ದೇಹದ ಇತರ ಭಾಗಗಳನ್ನು ತಿಂದಿವೆ ಎಂದು ವರದಿಯಲ್ಲಿ ತಿಳಿದುಬಂದಿದೆ.
short by lloyd / 07:58 pm on 19 Jun
ಭಾರತ ಮಹಿಳಾ ಬ್ಯಾಟರ್ ಸ್ಮೃತಿ ಮಂಧಾನ ಬುಧವಾರ ವಿರಾಟ್‌ ಕೊಹ್ಲಿಯಂತಹ ಆಕ್ಷನ್ ಜತೆ ಚೊಚ್ಚಲ ಅಂತಾರಾಷ್ಟ್ರೀಯ ವಿಕೆಟ್ ಪಡೆದರು. 27ರ ಹರೆಯದ ಅವರು 2ನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸುನೆ ಲೂಸ್ 12(13) ಅವರನ್ನು ಔಟ್ ಮಾಡಿದರು. ಇದು ಮಂಧಾನ ಅವರ ಅಂತಾರಾಷ್ಟ್ರೀಯ ವೃತ್ತಿ ಬದುಕಿನ 2ನೇ ಎಸೆತವಾಗಿತ್ತು. ಈ ಪಂದ್ಯದಲ್ಲಿ ಮೊದಲು ಮಂಧಾನ 136(120) ರನ್ ಗಳಿಸಿ, ಭಾರತ ಮಹಿಳಾ ತಂಡದ ಪರ ಅತಿ ಹೆಚ್ಚು ODI ಶತಕ (7) ಗಳಿಸಿದ ಮಿಥಾಲಿ ರಾಜ್ ದಾಖಲೆ ಸರಿಗಟ್ಟಿದರು.
short by lloyd / 09:59 pm on 19 Jun
ಕುದುರೆಮುಖ ಮತ್ತು ನೇತ್ರಾವತಿ ಗಿರಿಶಿಖರ ಚಾರಣಕ್ಕೆ ಅರಣ್ಯ ಇಲಾಖೆ ಜೂನ್ 25ರಿಂದ ಆನ್‌ಲೈನ್ ಬುಕಿಂಗ್ ನಿಯಮ ಜಾರಿಗೊಳಿಸಲಿದೆ. ಚಾರಣಿಗರು ಪ್ರತಿ ತಿಂಗಳ 25ರಂದು ಮುಂದಿನ 30 ದಿನಗಳಿಗೆ www.kuduremukhanationalpark.in ವೆಬ್‌ಸೈಟ್ ಮೂಲಕ ಬುಕಿಂಗ್ ಮಾಡಬಹುದಾಗಿದೆ. ನೇತ್ರಾವತಿ ಚಾರಣಕ್ಕೆ ₹500 ಮತ್ತು ಕುದುರೆಮುಖಕ್ಕೆ ₹575 ದರ ನಿಗದಿಪಡಿಸಲಾಗಿದೆ. 50 ಪ್ರವಾಸಿಗರಿಗೆ ತತ್ಕಾಲ್ ರೂಪದಲ್ಲಿ ಬುಕಿಂಗ್‌ಗೆ ಅವಕಾಶ ಇರಲಿದ್ದು, ಒಬ್ಬರು 3 ಜನರಿಗೆ ಮಾತ್ರ ಬುಕಿಂಗ್ ಮಾತ್ರ ಮಾಡಬಹುದಾಗಿದೆ.
short by lloyd / 09:43 pm on 19 Jun
ಮಧ್ಯಪ್ರದೇಶದ ಧಾರ್‌ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಕೇಂದ್ರ ಸಚಿವೆ ಸಾವಿತ್ರಿ ಠಾಕೂರ್ ಅವರು 'ಬೇಟಿ ಬಚಾವೋ, ಬೇಟಿ ಪಡಾವೋ' ಎಂದು ಬರೆಯಲು ವಿಫಲರಾಗಿರುವುದನ್ನು ತೋರಿಸುವ ವಿಡಿಯೋ ಬೆಳಕಿಗೆ ಬಂದಿದೆ. ಉರ್ದು ಶಿಕ್ಷಣ ಮಂಡಳಿಯಿಂದ 2018ರಲ್ಲಿ 12ನೇ ತರಗತಿ ಪರೀಕ್ಷೆ ಉತ್ತೀರ್ಣರಾಗಿದ್ದೇನೆ ಎಂದು ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಘೋಷಿಸಿದ್ದರು. 3 ದಿನಗಳ ಪ್ರವೇಶೋತ್ಸವ ಕಾರ್ಯಕ್ರಮ ಉದ್ಘಾಟಿಸಲು ಅವರು ಶಾಲೆಗೆ ಭೇಟಿ ನೀಡಿದ್ದರು.
short by lloyd / 09:28 pm on 19 Jun
“ಪಕ್ಷ, ಮತದಾರರು ನನ್ನ ಸ್ಪರ್ಧೆ ಬಯಸಿದರೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸುವೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಹೇಳಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಗ್ಗೆ ನಿರ್ಧಾರವಾಗಿಲ್ಲ ಎಂದು ಅವರು ಹೇಳಿದ್ದಾರೆ. “ಚನ್ನಪಟ್ಟಣ ನನಗೆ ರಾಜಕೀಯ ಜನ್ಮ ನೀಡಿದ ತಾಲ್ಲೂಕು. ಸಾತನೂರಿನಿಂದ ನಾಲ್ಕು ಬಾರಿ ಗೆದ್ದಿದ್ದೇನೆ. ಮತದಾರರಿಗೆ ನನ್ನ ಮೇಲೆ ಪ್ರೀತಿ, ವಿಶ್ವಾಸ, ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.
short by vinayak / 05:29 pm on 19 Jun
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಅನಿವಾರ್ಯವಾದರೆ ಸ್ಪರ್ಧಿಸುವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇಲ್ಲಿ 1952ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ವೆಂಕಟಪ್ಪ ಗೆಲುವು ಸಾಧಿಸಿದ್ದು, ಆ ಬಳಿಕ 2023ರವರೆಗೆ ಒಟ್ಟು 18 ಚುನಾವಣೆಗಳು ನಡೆದಿವೆ. ಇವುಗಳ ಪೈಕಿ ಕಾಂಗ್ರೆಸ್ 6ರಲ್ಲಿ ಗೆಲುವು ಸಾಧಿಸಿದೆ. 2004 ಮತ್ತು 2008ರಲ್ಲಿ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‌ನಿಂದ ಗೆದ್ದಿದ್ದು, ಇದರ ಬಳಿಕ ಇಲ್ಲಿ ಕಾಂಗ್ರೆಸ್ ಗೆದ್ದಿಲ್ಲ.
short by lloyd / 07:30 pm on 19 Jun
ಸೆಮಿಕಂಡಕ್ಟರ್ ಘಟಕ ಕೊಟ್ಟರೆ ಸಬ್ಸಿಡಿ ಕೊಡ್ತೀರಾ ಎಂಬ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಸಚಿವ ಎಂ.ಬಿ.ಪಾಟೀಲ್, “ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆಗೆ ಗುಜರಾತಿಗೆ ನೀಡಿದ ಹಾಗೆ ಶೇ.50ರಷ್ಟು ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೀಡುವುದಾದರೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇ.20ರಷ್ಟು ಸಬ್ಸಿಡಿ ಕೊಡಲು ಸಿದ್ಧ” ಎಂದು ಹೇಳಿದ್ದಾರೆ. “ಈ ಭರವಸೆಯಿಂದ ಕುಮಾರಸ್ವಾಮಿ ಹಿಂದೆ ಸರಿಯಲ್ಲ ಎಂಬ ವಿಶ್ವಾಸ ಇದೆ” ಎಂದು ಅವರು ತಿಳಿಸಿದ್ದಾರೆ.
short by aboobakker / 06:26 pm on 19 Jun
‘ಸಾಹಿತಿಗಳು ರಾಜಕಾರಣಿಗಳೇ, ಬಾಯಿಬಿಟ್ಟು ಹೇಳುವುದಿಲ್ಲ ಅಷ್ಟೇ’ ಎನ್ನುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಧಟತನ ತೋರಿದ್ದು, ಅವರು ಬೇಷರತ್ ಕ್ಷಮೆಯಾಚಿಸಬೇಕೆಂದು ರಾಜ್ಯದ ಹಲವು ಲೇಖಕರು ಆಗ್ರಹಿಸಿದ್ದಾರೆ. ಈ ಕುರಿತು ಬಿಡುಗಡೆ ಮಾಡಿರುವ ಜಂಟಿ ಪತ್ರಿಕಾ ಹೇಳಿಕೆಗೆ 50ಕ್ಕೂ ಹೆಚ್ಚು ಲೇಖಕರು ಸಹಿ ಹಾಕಿದ್ದಾರೆ. ‘ನಾವು ಸಂವಿಧಾನಬದ್ಧ ರಾಜಕೀಯದಲ್ಲಿ ನಂಬಿಕೆ ಇಟ್ಟು ಕೆಲಸ ನಿರ್ವಹಿಸುತ್ತಿದ್ದೇವೆಯೇ ಹೊರತು ಯಾವುದೇ ಪಕ್ಷದ ಬಾಲಂಗೋಚಿಗಳಲ್ಲ’ ಎಂದು ಲೇಖಕರು ಟೀಕಿಸಿದ್ದಾರೆ.
short by aboobakker / 09:46 pm on 19 Jun
ಭಾರತದ ದೊಡ್ಡ ನಗರಗಳು ಶಾಖದ ರಾತ್ರಿಗಳನ್ನು ನೋಡುತ್ತಿವೆ ಏಕೆಂದರೆ ಈ ನಗರಗಳಲ್ಲಿ ನಿರ್ಮಾಣ ಮತ್ತು ಕಾಂಕ್ರೀಟೀಕರಣ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರದ ರಜನೀಶ್ ಸರೀನ್ ಹೇಳಿದ್ದಾರೆ. "ಕಾಂಕ್ರೀಟ್ ಕಟ್ಟಡಗಳು ಹಗಲಿನಲ್ಲಿ ಶಾಖವನ್ನು ಹೀರಿಕೊಳ್ಳುತ್ತವೆ ಮತ್ತು ರಾತ್ರಿಯಲ್ಲಿ ಅದನ್ನು ಬಿಡುಗಡೆ ಮಾಡುತ್ತವೆ" ಎಂದು ಸರೀನ್ ಹೇಳಿದ್ದಾರೆ. "ಎತ್ತರದ ಕಟ್ಟಡಗಳ ನಿರ್ಮಾಣವು ಗಾಳಿಯ ಚಲನೆ ಮೇಲೆ ಪರಿಣಾಮ ಬೀರುತ್ತಿವೆ" ಎಂದು ಸರೀನ್ ಹೇಳಿದರು.
short by aboobakker / 09:16 pm on 19 Jun
ಅಯೋಧ್ಯೆಯ ರಾಮಮಂದಿರ ಆವರಣದ ಹೊರಗೆ ನಿಯೋಜಿಸಲಾಗಿದ್ದ ಉತ್ತರ ಪ್ರದೇಶದ ವಿಶೇಷ ಭದ್ರತಾ ಪಡೆಯ 25 ವರ್ಷದ ಯೋಧ ಆಕಸ್ಮಿಕವಾಗಿ ಗುಂಡೇಟು ತಗುಲಿ ಸಾವನ್ನಪ್ಪಿದ್ದಾನೆ. ಗುಂಡು ತಗುಲಿದ ನಂತರ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದ್ದು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಮಾರ್ಚ್‌ನಲ್ಲಿ, ರಾಮಮಂದಿರ ಆವರಣದಲ್ಲಿ ಆಕಸ್ಮಿಕ ಗುಂಡೇಟಿಗೆ ಪಿಎಸಿ ಕಮಾಂಡೋ ಗಾಯಗೊಂಡಿದ್ದರು.
short by lloyd / 05:35 pm on 19 Jun
ಮೆಕ್ಕಾದಲ್ಲಿ ಬಿಸಿಲಿನ ನಡುವೆ ಸಾವನ್ನಪ್ಪಿದ 645 ಹಜ್ ಯಾತ್ರಾರ್ಥಿಗಳಲ್ಲಿ 68 ಭಾರತೀಯರು ಸೇರಿದ್ದಾರೆ ಎಂದು ಸೌದಿ ಅರೇಬಿಯಾದ ರಾಜತಾಂತ್ರಿಕರನ್ನು ಉಲ್ಲೇಖಿಸಿ AFP ವರದಿ ಮಾಡಿದೆ. "ಕೆಲವರು ನೈಸರ್ಗಿಕ ಕಾರಣಗಳಿಂದ ಮೃತಪಟ್ಟಿದ್ದಾರೆ ಮತ್ತು ಅನೇಕ ವೃದ್ಧರು ಯಾತ್ರೆ ಕೈಗೊಂಡಿದ್ದಾರೆ" ಎಂದು ರಾಜತಾಂತ್ರಿಕರು ಹೇಳಿದ್ದಾರೆ. ಸೋಮವಾರ ಮೆಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ತಾಪಮಾನವು 51.8 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ.
short by aboobakker / 07:30 pm on 19 Jun
ಬಿಹಾರದ ರಾಜ್‌ಗಿರ್‌ನಲ್ಲಿ ಸುಮಾರು 1,600 ವರ್ಷ ಹಳೆಯದಾದ ನಳಂದಾ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಅನ್ನು ₹1,749 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು, ಇದು 'ನಿವ್ವಳ ಶೂನ್ಯ' ಹಸಿರು ಕ್ಯಾಂಪಸ್ ಆಗಿದೆ. ಸೌರಸ್ಥಾವರ, ನೀರಿನ ಮರುಬಳಕೆ ಘಟಕ, 100 ಎಕರೆ ಜಲಮೂಲಗಳು, 2 ಶೈಕ್ಷಣಿಕ ಬ್ಲಾಕ್‌, 40 ತರಗತಿ ಕೊಠಡಿಗಳೊಂದಿಗೆ ಒಟ್ಟು 1,900 ಆಸನ, 550 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಈ ಕ್ಯಾಂಪಸ್‌ನಲ್ಲಿದೆ. ಅಂತಾರಾಷ್ಟ್ರೀಯ ಕೇಂದ್ರ, ಆಂಫಿಥಿಯೇಟರ್, ಕ್ರೀಡಾ ಸಂಕೀರ್ಣ ಸಹ ಇಲ್ಲಿದೆ.
short by vinayak / 07:43 pm on 19 Jun
Load More
For the best experience use inshorts app on your smartphone