For the best experience use Mini app app on your smartphone
‘ಸಾಹಿತಿಗಳು ರಾಜಕಾರಣಿಗಳೇ, ಬಾಯಿಬಿಟ್ಟು ಹೇಳುವುದಿಲ್ಲ ಅಷ್ಟೇ’ ಎನ್ನುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಧಟತನ ತೋರಿದ್ದು, ಅವರು ಬೇಷರತ್ ಕ್ಷಮೆಯಾಚಿಸಬೇಕೆಂದು ರಾಜ್ಯದ ಹಲವು ಲೇಖಕರು ಆಗ್ರಹಿಸಿದ್ದಾರೆ. ಈ ಕುರಿತು ಬಿಡುಗಡೆ ಮಾಡಿರುವ ಜಂಟಿ ಪತ್ರಿಕಾ ಹೇಳಿಕೆಗೆ 50ಕ್ಕೂ ಹೆಚ್ಚು ಲೇಖಕರು ಸಹಿ ಹಾಕಿದ್ದಾರೆ. ‘ನಾವು ಸಂವಿಧಾನಬದ್ಧ ರಾಜಕೀಯದಲ್ಲಿ ನಂಬಿಕೆ ಇಟ್ಟು ಕೆಲಸ ನಿರ್ವಹಿಸುತ್ತಿದ್ದೇವೆಯೇ ಹೊರತು ಯಾವುದೇ ಪಕ್ಷದ ಬಾಲಂಗೋಚಿಗಳಲ್ಲ’ ಎಂದು ಲೇಖಕರು ಟೀಕಿಸಿದ್ದಾರೆ.
short by aboobakker / 09:46 pm on 19 Jun
For the best experience use inshorts app on your smartphone