For the best experience use Mini app app on your smartphone
ಕಾಡಾನೆ ದಾಳಿ ತಡೆಗೆ ಚಿಕ್ಕಮಗಳೂರು ಜಿಲ್ಲೆ ಆಲ್ದೂರು, ಸಾರಗೋಡು ವ್ಯಾಪ್ತಿಯ 80 ಕಿ.ಮೀ.ಪ್ರದೇಶದಲ್ಲಿ ಅರಣ್ಯ ಇಲಾಖೆ ‘ಟೆಂಟಿಕಲ್‌ ಬೇಲಿ’ ನಿರ್ಮಿಸಲು ಮುಂದಾಗಿದೆ. 18 ಅಡಿ ಎತ್ತರದ ತೂಗು ಮಾದರಿಯಲ್ಲಿರುವ ಈ ವ್ಯವಸ್ಥೆ ಸೌರಶಕ್ತಿ ಆಧಾರಿತವಾಗಿದೆ. ಇದರಲ್ಲಿ 12 ವೊಲ್ಟ್‌ ವಿದ್ಯುತ್‌ ಹರಿಸುವುದರಿಂದ ಬೇಲಿ ತಾಕಿದರೆ ಪ್ರಾಣಿಗಳಿಗೆ ಸಣ್ಣದಾಗಿ ವಿದ್ಯುತ್‌ ಸ್ಪರ್ಶದ ಅನುಭವವಾಗಿ ಕೂಡಲೇ ಅವುಗಳು ಹಿಂದಕ್ಕೆ ಹೋಗುತ್ತವೆ. ವಿದ್ಯುತ್‌ನಿಂದ ಪ್ರಾಣಿಗಳಿಗೆ ಅಪಾಯವಿಲ್ಲ.
short by vinayak / 05:18 pm on 19 Jun
For the best experience use inshorts app on your smartphone