ಖಾಸಗಿ ಆಸ್ಪತ್ರೆಯೊಂದನ್ನು ನಡೆಸುತ್ತಿರುವ ವೈದ್ಯನ ವಿರುದ್ಧ ಅಕ್ರಮ ಗರ್ಭಪಾತ ಹಗರಣದ ಆರೋಪವಿದ್ದು, ಈ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ವಿಚಾರಣೆ ರದ್ದತಿಗೆ ರವಿಕುಮಾರ್ ಎನ್.ಕೆ ಸಲ್ಲಿಸಿದ್ದ ಅರ್ಜಿಯನ್ನು ಜಸ್ಟೀಸ್ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ. 74 ಅಕ್ರಮ ಗರ್ಭಪಾತ ಹಾಗೂ ಕಾಯ್ದೆಯಡಿ ಅಗತ್ಯವಿರುವ ರಿಜಿಸ್ಟರ್ಗಳನ್ನು ಸರಿಯಾಗಿ ನಿರ್ವಹಿಸಿಲ್ಲ ಎನ್ನುವ ಆರೋಪ ಆ ವೈದ್ಯನ ವಿರುದ್ಧ ಇದೆ.
short by
Koushik KS /
05:05 pm on
30 Apr