For the best experience use Mini app app on your smartphone
ಅತಿಯಾಗಿ ಮದ್ಯ ಸೇವಿಸಿದ್ದ ಯುವಕನೋರ್ವ ಫುಟ್‌ಪಾತ್‌ ಬಳಿ ಮಲಗಿದ್ದಲ್ಲೇ ಸಾವನ್ನಪ್ಪಿರುವ ಘಟನೆ ಹುಣಸೂರು ನಗರದಲ್ಲಿ ನಡೆದಿದೆ. ಕಸಬಾ ಹೋಬಳಿಯ ರಾಮಪಟ್ಟಣದ ಆದಿತ್ಯ ಮೃತ ಯುವಕ. ಹುಣಸೂರಿನ ರೇಣುಕಾ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಆದಿತ್ಯ, ಸೋಮವಾರ ರಾತ್ರಿ ಕೆಲಸ ಮುಗಿಸಿಕೊಂಡು ಅತಿಯಾದ ಮದ್ಯ ಸೇವಿಸಿ ತಾಲ್ಲೂಕು ಪಂಚಾಯತ್ ಕಚೇರಿ ಬಳಿಯ ಫುಟ್‌ಪಾತ್‌‌ ಬಳಿ ಮಲಗಿದ ಬಳಿಕ ಮೃತಪಟ್ಟಿದ್ದಾನೆ.
short by Koushik KS / 10:29 am on 01 May
For the best experience use inshorts app on your smartphone