“ದೇಶದ ಅಭಿವೃದ್ಧಿಗೆ ಪ್ರಾಮಾಣಿಕ ತೆರಿಗೆ ಸಂದಾಯ ಅತಿ ಮುಖ್ಯ. ಆದಾಯ ತೆರಿಗೆ ಪಿಡುಗಲ್ಲ, ಅದು ದೇಶದ ಅಭಿವೃದ್ಧಿಗೆ ಪೂರಕ” ಎಂದು ತೆರಿಗೆ ಸಲಹೆಗಾರ ಮತ್ತು ಲೆಕ್ಕ ಪರಿಶೋಧಕ ಎಂ.ಸಿ.ಸುಂದರ್ ಹೇಳಿದರು. ಮೈಸೂರಿನ ನಟರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ವೊಂದರಲ್ಲಿ ಉಪನ್ಯಾಸ ನೀಡಿದ ಅವರು, “ಪ್ರತಿಯೊಬ್ಬರು ತೆರಿಗೆ ಪಾವತಿಯನ್ನು ಮೂಲಭೂತ ಕರ್ತವ್ಯವೆಂದು ಭಾವಿಸಬೇಕು. ಆಯಾಕಾಲಕ್ಕೆ ಬದಲಾಗುವ ತೆರಿಗೆ ನಿಯಮ ಅರ್ಥೈಸಿಕೊಂದು ಅದರಂತೆ ಪಾವತಿಸಬೇಕು” ಎಂದರು.
short by
Prashant badiger /
11:38 am on
28 Apr