For the best experience use Mini app app on your smartphone
ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಪಂಚ ಗ್ಯಾರಂಟಿ ಯೋಜನೆಗಳು ಮತದಾರರನ್ನು ಭ್ರಷ್ಟರನ್ನಾಗಿಸುವ ಕ್ರಮ ಎನ್ನಲಾಗದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. “ಗ್ಯಾರಂಟಿಗಳು ಯಾವ ರೀತಿ ಆರ್ಥಿಕತೆಗೆ ಧಕ್ಕೆ ತರಲಿವೆ ಎಂಬುದನ್ನು ಇತರ ಪಕ್ಷಗಳು ಹೇಳಬೇಕು” ಎಂದು ಹೈಕೋರ್ಟ್ ಸೂಚಿಸಿದೆ. ಗ್ಯಾರಂಟಿ ಆಮಿಷವೊಡ್ಡಿ ಶಾಸಕ ಜಮೀರ್ ಅಹಮದ್ ಖಾನ್ ಮತ ಕೋರಿದ್ದು, ಅವರ ಆಯ್ಕೆ ರದ್ದುಪಡಿಸಬೇಕು ಎಂದು ಮತದಾರ ಶಶಾಂಕ್ ಶ್ರೀಧರ್ ಅರ್ಜಿ ಸಲ್ಲಿಸಿದ್ದರು.
short by Prashant badiger / 09:18 am on 28 Apr
For the best experience use inshorts app on your smartphone