ಜೆಡಿಎಸ್ನ 19 ಶಾಸಕರು ಕಾಂಗ್ರೆಸ್ನ ಯಾವ ಆಮಿಷಕ್ಕೂ ಒಳಗಾಗುವುದಿಲ್ಲ ಎಂದು ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, “ಜೆಡಿಎಸ್ನ 19 ಶಾಸಕರು ಕಾಂಗ್ರೆಸ್ನ ಬಿರುಗಾಳಿ ಎದುರು ಗೆದ್ದು ಬಂದಂತವರು. ಈಗ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಅಸಮಾಧಾನ ಭಿನ್ನಮತ ಉಂಟಾಗಿದೆ ಎಂಬುದು ಸುಳ್ಳು ಸುದ್ದಿ” ಎಂದರು. ಪ್ರಜ್ವಲ್ ಅವರನ್ನು ನಾವು ಅಮಾನತು ಮಾಡಿದ್ದೇವೆ, ಪ್ರಕರಣ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
short by
Koushik KS /
01:22 pm on
04 May