ಟಿ ನರಸೀಪುರ ತಾಲೂಕಿನ ಬನ್ನೂರಿನ ಮಾದೇಗೌಡನ ಹುಂಡಿ ಗ್ರಾಮದಲ್ಲಿ ಸ್ಫೋಟಕ ಸಿಡಿದು ಹಸುವಿನ ಬಾಯಿ ಛಿದ್ರಗೊಂಡ ಘಟನೆ ವರದಿಯಾಗಿದೆ. ಹಸು ಜಮೀನಿನಲ್ಲಿ ಮೇಯುವ ವೇಳೆ ಸ್ಫೋಟಕಕ್ಕೆ ಬಾಯಿ ಹಾಕಿದ್ದು, ಈ ವೇಳೆ ಸ್ಫೋಟಕ ಸಿಡಿದು ಹಸುವಿನ ಬಾಯಿ ಸಂಪೂರ್ಣವಾಗಿ ಛಿದ್ರವಾಗಿದೆ. ಹಸುವಿನ ಮಾಲೀಕ ನಾಗರಾಜು ತನ್ನ ಇನ್ನೊಂದು ಹಸುವನ್ನು ಮನೆಯಲ್ಲಿ ಕಟ್ಟಿ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ವಿಧಿ ವಿಜ್ಞಾನ ಅಧಿಕಾರಿಗಳು ಭೇಟಿ ನೀಡಿದ್ದಾರೆ.
short by
Lloyd Dias /
10:08 pm on
28 Apr