ಮೈಸೂರಲ್ಲಿ ನಡೆದ ‘ಕೋಮುವಾದ ವಿರೋಧಿಸಿ ಸಂವಿಧಾನ ಉಳಿಸಿ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಮೈಸೂರಿನ ಮಾಜಿ ಮೇಯರ್ ನಾರಾಯಣ, ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳು ಒಂದಾದರೆ ಮಾತ್ರ ಸಂವಿಧಾನ ಉಳಿಸಲು ಸಾಧ್ಯ ಎಂದರು. “ಷಡ್ಯಂತ್ರಗಳನ್ನು ಹೂಡಿ ಸಂವಿಧಾನದ ಆಶಯಗಳನ್ನು ಮೆಟ್ಟಿ ನಿಲ್ಲುವ ಕೆಲಸವಾಗುತ್ತಿದೆ. ಕೋಮುವಾದಿಗಳಿಂದ ಸಂವಿಧಾನ ರಕ್ಷಿಸಲು ಎಲ್ಲ ಉಪಜಾತಿಗಳು ಒಂದಾಗಬೇಕಿದೆ” ಎಂದು ಅವರು ಹೇಳಿದರು.
short by
Lloyd Dias /
09:00 pm on
28 Apr