For the best experience use Mini app app on your smartphone
ಪಿರಿಯಾಪಟ್ಟಣ ತಾಲ್ಲೂಕಿನ ಕಂದಾಯ ಇಲಾಖೆ ಸೇರಿದಂತೆ 90% ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಪಿ.ಜಿ.ಜನಸ್ಪಂದನ ಫೌಂಡೇಶನ್ ಅಧ್ಯಕ್ಷ ಪ್ರಶಾಂತ್ ಗೌಡ ಆರೋಪಿಸಿದ್ದಾರೆ. “ಸರ್ಕಾರಿ ಅನುದಾನಗಳು ಸರಿಯಾಗಿ ವಿತರಣೆ ಆಗುತ್ತಿಲ್ಲ, ಸಿಎಂ ಚಾಲನೆ ನೀಡಿದ್ದ 15೦ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಈವರೆಗೆ ಪೂರ್ಣಗೊಂಡಿಲ್ಲ” ಎಂದು ಅವರು ತಿಳಿಸಿದರು. ಸರ್ಕಾರಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ ಎಂದು ಪ್ರಶಾಂತ್ ಗೌಡ ಹೇಳಿದ್ದಾರೆ.
short by Prashant badiger / 10:22 pm on 30 Apr
For the best experience use inshorts app on your smartphone