For the best experience use Mini app app on your smartphone
ಬಿರುಗಾಳಿ ಸಹಿತ ಸುರಿದ ಮಳೆಗೆ ನಂಜನಗೂಡು ತಾಲ್ಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ಶಿವಶಂಕರ್ ಎಂಬುವವರಿಗೆ ಸೇರಿದ ಬಾಳೆ ಹಾಗೂ ಹೀರೆಕಾಯಿ ಬೆಳೆ ನಾಶವಾಗಿದೆ. ಒಂದು ಎಕರೆಯಲ್ಲಿ ಬೆಳೆದಿದ್ದ ಬಾಳೆ ಹಾಗೂ ಇನ್ನೊಂದು ಎಕರೆಯಲ್ಲಿ ಬೆಳೆದಿದ್ದ ಹೀರೆಕಾಯಿ ಸಂಪೂರ್ಣ ನೆಲಕಚ್ಚಿದೆ. “ಶುಕ್ರವಾರ ಸಂಜೆ ಸುರಿದ ಮಳೆಯಿಂದ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಸರ್ಕಾರ ಕೂಡಲೇ ಪರಿಹಾರ ನೀಡಬೇಕು” ಎಂದು ಶಿವಶಂಕರ್ ಕೇಳಿಕೊಂಡಿದ್ದಾರೆ.
short by Koushik KS / 03:22 pm on 04 May
For the best experience use inshorts app on your smartphone