For the best experience use Mini app app on your smartphone
ಭೂಮಿ ಮೇಲಿನ ದೌರ್ಜನ್ಯ ಮಕ್ಕಳ ಮೇಲಿನ ದೌರ್ಜನ್ಯದಷ್ಟೇ ಪಾಪದ ಕೆಲಸವೆಂದು ಒಡನಾಡಿ ಸಂಸ್ಥೆಯ ಕೆ.ವಿ.ಸ್ಟ್ಯಾನ್ಲಿ ಹೇಳಿದರು. ಹುಣಸೂರಿನಲ್ಲಿ ಆಯೋಜಿಸಿದ್ದ ‘ವಿಶ್ವ ಭೂಮಿ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೂತಾಯಿಯ ದುರುಪಯೋಗದಿಂದ ಭೂಮಿ ಬಂಜೆ ಆಗುವ ಪರಿಸ್ಥಿತಿ ಉಂಟಾಗಿದೆ ಎಂದರು. “ಜಲ ಮೂಲಗಳನ್ನು ಕಲುಷಿತಗೊಳಿಸುವ ಮೂಲಕ ನಮಗೆ ನಾವೇ ವಿಷ ತಿನ್ನುವಂತಹ ಪರಿಸ್ಥಿತಿ ಎದುರಾಗಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ” ಎಂದು ಅವರು ಹೇಳಿದರು.
short by Prashant badiger / 09:35 pm on 30 Apr
For the best experience use inshorts app on your smartphone