ಪ್ರಧಾನಿ ನರೇಂದ್ರ ಮೋದಿಗೆ ಮತ ಹಾಕುವಂತೆ ಜನರಿಗೆ ಮನವಿ ಮಾಡಿದ ವ್ಯಕ್ತಿಯೊಬ್ಬನ ಮದುವೆಯ ಆಮಂತ್ರಣ ಪತ್ರಿಕೆ ಬಗ್ಗೆ ಆತನ ಸಂಬಂಧಿಕರೊಬ್ಬರು ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ ಪ್ರಕರಣ ದಾಖಲಾಗಿದೆ. "ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆ ಮಾಡುವುದೇ ವಧುವರರಿಗೆ ನೀವು ನೀಡುವ ಉಡುಗೊರೆ" ಎಂದು ಪತ್ರಿಕೆಯಲ್ಲಿ ಬರೆಯಲಾಗಿದೆ. ಮತದಾನದ ದಿನಾಂಕ ಘೋಷಣೆಗೂ ಮುನ್ನ ಕಾರ್ಡ್ ಪ್ರಿಂಟ್ ಆಗಿತ್ತು ಎಂದು ವರ ಹೇಳಿದ್ದಾನೆ.
short by
Prashant badiger /
05:21 pm on
30 Apr