For the best experience use Mini app app on your smartphone
ಮೈಸೂರಿನಲ್ಲಿ ಶುಕ್ರವಾರ ಸುರಿದ ಗಾಳಿ-ಮಳೆಗೆ ಮರ ಉರುಳಿಬಿದ್ದ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೂವರು ವಿದ್ಯಾರ್ಥಿಗಳಿಗೆ ಗಾಯವಾಗಿದೆ. ನಗರದ ಲಲಿತ್‌ಮಹಲ್ ಹೆಲಿಪ್ಯಾಡ್ ಬಳಿ ಸಹನಾ ಎಂಬುವವರ ಮೇಲೆ ಮರ ಬಿದ್ದಿದ್ದು, ಕಾರಂಜಿ ಕೆರೆಯ ಬಳಿ ಅಮೀರ್ ಇರ್ಫಾನ್ ಮತ್ತು ಶಂಸುದ್ದೀನ್ ಎಂಬುವವರ ದ್ವಿಚಕ್ರ ವಾಹನದ ಮೇಲೆ ಮರ ಉರುಳಿದೆ. ಗಾಯಾಳುಗಳನ್ನು ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಕ್ಕೆ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
short by Lloyd Dias / 02:22 pm on 04 May
For the best experience use inshorts app on your smartphone