ಮೈಸೂರಿನ ಗೋಕುಲಂನ ಹಸು-ಕರು ಪಾರ್ಕ್ ಬಳಿಯ ಮನೆಯೊಂದರಲ್ಲಿ ಏಪ್ರಿಲ್ 2ರಂದು ಕಳ್ಳತನ ಮಾಡಿದ್ದ ಕಳ್ಳ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಗೆಳೆಯನ ಸ್ಕೂಟರ್ನಲ್ಲಿ ಗೋಕುಲಂನಲ್ಲಿ ಯೋಗೇಶ್ ಎಂಬುವವರ ಮನೆಗೆ ನುಗ್ಗಿದ್ದ ಕಳ್ಳ, 650 ಗ್ರಾಂ ಚಿನ್ನ ಹಾಗೂ ₹2 ಲಕ್ಷ ನಗದನ್ನು ಕದ್ದು ಪರಾರಿಯಾಗಿದ್ದನು. ಈ ಕುರಿತು ಯೋಗೇಶ್ ವಿವಿ ಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಬಸವೇಶ್ವರ ನಗರ ಪೊಲೀಸರು 300 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ.
short by
Koushik KS /
07:52 am on
01 May