For the best experience use Mini app app on your smartphone
ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಚುನಾವಣೆಯಲ್ಲಿ ಸಿಹಿ-ಕಹಿ ಎರಡೂ ಅನುಭವಾಗಿದೆ. ಕಹಿಯು ಜೀವನದಲ್ಲಿ ಕಲಿಯುವ ಅವಕಾಶ ಮಾಡಿಕೊಟ್ಟರೆ, ಸಿಹಿ ಇನ್ನೂ ಶಕ್ತಿ ತುಂಬಿದೆ” ಎಂದರು. ನಿಮ್ಮ ಮತಗಳ ಮೂಲಕ ನಾನು ಆಯ್ಕೆ ಆದರೆ ನಿಮ್ಮ ಜತೆಯಲ್ಲೇ ಕೆಲಸ ಮಾಡುತ್ತೇನೆ ಎಂದು ಅವರು ತಿಳಿಸಿದರು.
short by Prashant badiger / 09:40 am on 28 Apr
For the best experience use inshorts app on your smartphone