ಬೀಗರ ಊಟ ಮಾಡಿದ್ದ 96 ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಶಿಂಗ್ರಿಹಳ್ಳಿಯಲ್ಲಿ ನಡೆದಿದೆ. ಅಸ್ವಸ್ಥಗೊಂಡವರಲ್ಲಿ 22 ಮಕ್ಕಳಿದ್ದು, ಎಲ್ಲರನ್ನು ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮದುವೆ ಸಮಾರಂಭದ ಬಳಿಕ ಶನಿವಾರ ಬೀಗರ ಊಟ ಮಾಡಿ ಮಲಗಿದ್ದವರ ಆರೋಗ್ಯದಲ್ಲಿ ತಡರಾತ್ರಿ ಏರುಪೇರಾಗಿದೆ. “ಎಲ್ಲರ ಆರೋಗ್ಯ ಸ್ಥಿರವಾಗಿದೆ” ಎಂದು ಡಿಹೆಚ್ಒ ಡಾ.ಶಂಕರನಾಯ್ಕ ತಿಳಿಸಿದ್ದಾರೆ.
short by
Prashant badiger /
03:51 pm on
28 Apr