ಮಳಿಗೆಗಳ ಬಾಡಿಗೆದಾರರಿಂದ ಶಾಸಕ ಡಿ.ರವಿಶಂಕರ್ ಕೋಟ್ಯಂತರ ರೂ. ಪಡೆದಿದ್ದಾರೆ ಎಂಬ ಆರೋಪ ಸುಳ್ಳು, ಈ ರೀತಿ ಅಪ ಪ್ರಚಾರ ಮಾಡಬೇಡಿ ಎಂದು ಮಾಜಿ ಸಚಿವ ಸಾರಾ ಮಹೇಶ್ಗೆ ಮಳೆಗೆಗಳ ಬಾಡಿಗೆದಾರರ ಬಳಗದ ಅಧ್ಯಕ್ಷ ಉಮೇಶ್ ಮನವಿ ಮಾಡಿದರು. ಕೆ.ಆರ್.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅಂಗಡಿ ನಡೆಸಿ ಜೀವನ ಸಾಗಿಸುವ ನಮ್ಮಲ್ಲಿ ಕೋಟಿಗಟ್ಟಲೆ ಹಣ ಎಲ್ಲಿಂದ ಬರಬೇಕು ಎಂದರು. ಹಾಲಿ ಶಾಸಕರು ಮತ್ತು ಮಾಜಿ ಸಚಿವರು ಒಂದಾಗಿ ನಮ್ಮ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.
short by
Prashant badiger /
08:17 pm on
30 Apr