For the best experience use Mini app app on your smartphone
“ಹಾಲಿ ಸಂಸದ ಪ್ರತಾಪ್ ಸಿಂಹ 20-25 ದಿನಗಳಿಂದ ಎಲ್ಲೂ ಕಾಣುತ್ತಿಲ್ಲ, ವೋಟ್ ಹಾಕಲು ಬಂದವರು ಎಲ್ಲೋ ಮಿಸ್ ಆಗಿದ್ದಾರೆ. ಬಹುಷಃ ಮುಂದಿನ ಐದು ವರ್ಷ ಕಾಣುವುದಿಲ್ಲವೋ ಏನೋ?” ಎಂದು ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಟೀಕಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆದ್ದ ಬಳಿಕ ಅವರ ಬಳಿ ಹೋಗಿ ಹಾರ ಹಾಕಿ, ಸುಳ್ಳನ್ನು ಸತ್ಯದ ರೀತಿ ಹೇಗೆ ಹೇಳಬೇಕೆಂಬ ಬಗ್ಗೆ ಮಾಹಿತಿ ಪಡೆಯುವೆ ಎಂದರು.
short by Prashant badiger / 02:14 pm on 28 Apr
For the best experience use inshorts app on your smartphone