ಹೆಚ್.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ದಮ್ಮನಕಟ್ಟೆ ಅರಣ್ಯ ವಲಯದಲ್ಲಿ ಶನಿವಾರ ಧಾರಾಕಾರ ಮಳೆ ಸುರಿದ ಪರಿಣಾಮ ಅತಿಯಾದ ಬಿಸಿಲಿನಿಂದ ಉಂಟಾಗುವ ಕಾಡ್ಗಿಚ್ಚಿನ ಆತಂಕ ದೂರವಾಗಿದೆ ಎಂದು ವರದಿಯಾಗಿದೆ. ನಾಗರಹೊಳೆ ಅಭಯಾರಣ್ಯದಲ್ಲಿ ಮಳೆಯ ಕೊರತೆಯಿಂದ ಸೋಲಾರ್ ಪಂಪ್ಸೆಟ್ಗಳ ಮೂಲಕ ಕೆರೆಗಳನ್ನು ತುಂಬಿ ವನ್ಯಜೀವಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿತ್ತು ಎಂದು ಡಿಸಿಎಫ್ ಹರ್ಷಕುಮಾರ್ ಈ ಹಿಂದೆ ತಿಳಿಸಿದ್ದರು.
short by
Lloyd Dias /
06:54 pm on
04 May